ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಜನವರಿ 10, 2011

ಒಡಲದನಿ ಆಲಿಸಲು ಕರೆ- 15 ಬೆಳಕಿನೆಡೆಗೆ ಕಾರ್ಯಕ್ರಮ



ಕೊಪ್ಪಳ : ಪ್ರತಿಯೊಬ್ಬರಲ್ಲಿಯೂ ಒಡಲದನಿ ಇದ್ದೇ ಇರುತ್ತದೆ. ಆ ದನಿಯನ್ನು ಆಲಿಸಿ ಅದರಲ್ಲಿಯ ಕೆಟ್ಟದ್ದನ್ನು ಕೈಬಿಟ್ಟು ಉತ್ತಮವಾದ ಜ್ಞಾನದ ವಿಚಾರಫಾಂಟ್ ಗಾತ್ರಗಳನ್ನು ಆಯ್ದುಕೊಂಡು ಮನುಷ್ಯ ಪರಿಪೂರ್ಣನಾಗಬೇಕೆಂದು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿ ನುಡಿದರು.
ಅವರು ಗವಿಮಠದ ಕೆರೆಯ ಆವರಣದಲ್ಲಿ ಪ್ರತಿತಿಂಗಳು ಅಮವಾಸ್ಯೆಯಂದ ನಡೆಯುವ ಬೆಳಕಿನೆಡೆಗೆ ಕಾರ್‍ಯಕ್ರಮದ ಮುಖ್ಯ ಅತಿಥಿಯಗಿ ಭಾಗವಹಿಸಿ ವೀರಣ್ಣ ಹುರಕಡ್ಲಿ ಭಾಗ್ಯನಗರ ಇವರ "ಒಡಲದನಿ" ಕವನಸಂಕಲನ ಬಿಡುಗಡೆಗೊಳಿಸಿ ಮೇಲಿನಂತೆ ಮಾತನಾಡುತ್ತ ಮುಂದುವರೆಸಿಸಿ ನಮ್ಮ ಮಾತುಗಳಲ್ಲಿರುವ ಜ್ಞಾನದ ವಿಚಾರವನ್ನು ತಿಳಿಯದಿದ್ದರೆ ಬದುಕಿನಲ್ಲಿ ಬಹಳಷ್ಟು ಅವಘಡಗಳು ಸಂಭವಿಸುತ್ತವೆ. ಅವುಗಳನ್ನು ಜ್ಞಾನಕ್ಕೆ ಪರಿವರ್ತಿಸಿಕೊಂಡರೆ ಅವನೇ ಮಹಾತ್ಮಾ ಸಂತ ಶರಣನಾಗುತ್ತಾನೆಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಲದನಿಯ ಕರ್ತೃ ವೀರಣ್ಣ ಹುರಕಡ್‌ಲಿ ತಾವು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಪ್ರೇರಣೆಯಾದದ್ದನ್ನು ಹೇಳುತ್ತಾ ಸಾಹಿತ್ಯ ಬದುಕಿಗೂ ಮತ್ತು ಸಮಾಜಕ್ಕೂ ನೆಮ್ಮದಿಯನ್ನು ಕೊಡುತ್ತದೆ ಆ ಕಾರಣದಿಂದ ಸಾಹಿತ್ಯ ನನಗೆ ಪ್ರಿಯವಾಗಿದೆ ಎಂದರು.
ನಂತರ ಸಂಗೀತ ಕಲಾವಿದೆ ಕು.ಅಂಬಿಕಾ ಉಪ್ಪಾರವರಿಂದ ಭಕ್ತಿಸಂಗೀತ ಕಾರ್‍ಯಕ್ರಮ ನಡೆಯಿತು. ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಅವರ ಸಂಗೀತಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಕಾರ್‍ಯಕ್ರಮ ನಿರ್ವಹಣೆ ಮಾಡಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದ ಪ್ರಕಾಶ ಕಂದಕೂರು ಮತ್ತು ಹಂಪಿ ಕನ್ನಡ ವಿಶ್ವವಿದ್ಯಲಯದಿಂದ ಪಿಎಚ್ಡಿ ಪದವಿ ಪಡೆದಿರುವ ಪ್ರಕಾಶ ಬಳ್ಳಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿಜಯಕುಮಾರ ಕವಲೂರವರು ಭಕ್ತಿಸೇವೆ ನಡೆಸಿಕೊಟ್ಟದ್ದರಿಂದ ಅವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು , ಪ್ರಾಚಾರ್‍ಯರಾದ ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರ, ಡಾ.ವಿ.ಬಿ.ರಡ್ಡೇರ, ಪರೀಕ್ಷಿತರಾಜ ಮತ್ತು ಮಾಲಿಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ಎಚ್.ಎಸ್.ಪಾಟೀಲ್, ಎಸ್.ಎಂ.ಕಂಬಾಳಿಮಠ, ಮಲ್ಲಿಕಾರ್ಜುನ ಸೋಮಲಾಪುರ, ಕವಿಸಮೂಹ ಬಳಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶನಿವಾರ, ಡಿಸೆಂಬರ್ 4, 2010

14ನೇ ಬೆಳಕಿನೆಡೆಗೆ ಕಾರ್ಯಕ್ರಮ

ನಗರದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ 14ನೇ ಬೆಳಕಿನೆಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿದೆ. ಈ ಸಲದ ಕಾರ್ಯಕ್ರಮದಲ್ಲಿ ಡಾ.ಸದಾಶಿವಯ್ಯ ಸೊಪ್ಪಿಮಠ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಶೋಕ ಬರಗುಂಡಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನಿಯಪ್ಪ ಹುಬ್ಬಳ್ಳಿ ವಹಿಸಲಿದ್ದಾರೆ. ಗವಿಮಠದ ಕೆರೆದಡದಲ್ಲಿ ನಡೆಯುವ ಈ ಕಾರ್ಯಕ್ರಮ ಸಂಜೆ 6.30ಕ್ಕೆ ನಡೆಯಲಿದೆ.

ಮಂಗಳವಾರ, ನವೆಂಬರ್ 2, 2010

೧೩ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ "ಪಂಡಿತ ಪುಟ್ಟರಾಜ ಕವಿಗವಾಯಿಗಳ ನೆನಹು" ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುರುಘಾಮಠ ಚಿತ್ರದುರ್ಗದ ಜಮುರಾ ಕಲಾಲೋಕ ತಂಡದವರಾದ ಶ್ರೀ ತೋಟಪ್ಪ ಉತ್ತಂಗಿ ಹಾಗೂ ಶ್ರೀಮತಿ ಕೋಕಿಲಾ ರುದ್ರಮೂರ್ತಿ, ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಭಾಗ್ಯನಗರದ ಸಾಹಿತಿಗಳಾದ ಶ್ರೀ ವಿಠ್ಠಪ್ಪ ಗೋರಂಟ್ಲಿ ಆಗಮಿಸಲಿದ್ದಾರೆ. ಭಕ್ತಿ ಸೇವೆಯನ್ನ ಶ್ರೀ ಎಸ್.ಎನ್ ತಿಮ್ಮನಗೌಡ್ರ ಪ್ರಥಮ ದರ್ಜೆ ಸಹಾಯಕರು, ಎ.ಪಿ.ಎಂ.ಸಿ, ಕೊಪ್ಪಳ ಇವರು ತಮ್ಮ ತಂದೆ ಲಿಂ.ನಿಂಗನಗೌಡ ತಿಮ್ಮನಗೌಡ್ರ ಇವರ ಸ್ಮರಣಾರ್ಥ ಆಯೋಜಿಸಿದ್ದಾರೆ. ಸಕಲ ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಶ್ರೀಮಠದ ಭಕ್ತಾದಿಗಳಿಗೆ ಸೂಚನೆ

೧. ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ನಡೆಯುವ 'ಬೆಳಕಿನೆಡೆಗೆ' ಮಾಸಿಕ ಕಾರ್ಯಕ್ರಮವನ್ನು ದೀಪಾವಳಿ ನಿಮಿತ್ಯ ದಿನಾಂಕ ೦೮-೧೧-೨೦೧೦ ಸೋಮವಾರದಂದು ಶ್ರೀ ಮಠದ ಕೆರೆಯ ದಡದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶುಕ್ರವಾರ, ಅಕ್ಟೋಬರ್ 8, 2010

೧೨ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಮ. ನಿ. ಪ್ರ. ಲಿಂ. ಜ. ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಶ್ರೀ ಮಠದ ಕೆರೆಯ ದಂಡೆಯ ಮೇಲೆ ೧೨ ನೇ ಮಾಸಿಕ ಬೆಳಕಿನೆಡೆಗೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಇಟಗಿ ಈರಣ್ಣ, ವಿಶ್ರಾಂತ ಪ್ರಾಧ್ಯಾಪಕರು, ಹೊಸಪೇಟೆ ಇವರು ಶರಣ ಸಂಸ್ಕೃತಿ ಕುರಿತು ಮಾತನಾಡುತ್ತಾ ಶರಣರು ಕಾಯಕಕ್ಕೆ ಮಹತ್ವ ನೀಡಿದ್ದಾರೆ. ನಾವು ಕಾಯಕ ಮಾಡುತ್ತಿಲ್ಲ. ಬರೀ ಮಾತನಾಡುತ್ತೇವೆ. ಹಾಗಾಗಬಾರದು. ನಾವು ಮಾತನಾಡಿದರೆ ಸಂಸ್ಕಾರಯುತ ಮಾತುಗಳನ್ನ ಮಾತನಾಡಬೇಕು. ಅಂದಾಗ ಜನ ಸ್ವೀಕಾರ ಮಾಡುತ್ತಾರೆ. ಶರಣರು ಅಂತಹ ಮಾತುಗಳನ್ನ ನುಡಿದಿದ್ದಾರೆ, ನುಡಿದಂತೆ ನಡೆದಿದ್ದಾರೆ. ಮಾತು ಮಾಣಿಕ್ಯಕ್ಕೆ ಸಮ ಎಂದು ಹೇಳುತ್ತಾ ಬಸವಣ್ಣನವರ "ನುಡಿದರೆ ಮುತ್ತಿನ ಹಾರದಂತಿರಬೇಕು" ಈ ಒಂದೇ ವಚನದ ವಿವಿಧ ಅರ್ಥ ಮುಖಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನ ಶ್ರೀ ಈಶ್ವರ ಹತ್ತಿ, ಕೊಪ್ಪಳ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಪ್ರೋ|| ಎಸ್. ಬಿ. ಹಿರೇಮಠ ಹಾಗೂ ಸಹೋದರರು ತಮ್ಮ ತಂದೆ ಲಿಂ. ಬಸಯ್ಯ ಹಿರೇಮಠ ಸ್ಮರಣಾರ್ಥ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಮಂಗಳವಾರ, ಏಪ್ರಿಲ್ 13, 2010

ಬುಧವಾರ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ : ಸ್ಥಳೀಯ ಪ್ರತಿಷ್ಠಿತ ಗವಿಮಠದಿಂದ ಪ್ರತಿತಿಂಗಳು ಅಮವಾಸ್ಯೆಯಂದು ಹಮ್ಮಿಕೊಳ್ಳಲಾಗುವ ಬೆಳಕಿನೆಡೆಗೆ ಕಾರ್ಯಕ್ರಮ ನಾಳ 14-4-2010ರಂದು ನಡೆಯಲಿದೆ.

ಸಂಜೆ 6-30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡಾ.ಗುರುದೇವಿ ಹುಲೆಪ್ಪನವರ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಡಾ.ಕೆ.ಬಿ.ಬ್ಯಾಳಿ ವಹಿಸಿಕೊಳ್ಳುವರು. ಗವಿಮಠದ ಕೆರೆದಡದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.