ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಮಾರ್ಚ್ 9, 2010

ಭರ್ಜರಿ ಮಹಾದಾಸೋಹ

ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದಲ್ಲಿ ಲಿಂ. ಜ. ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯಸ್ಮರಣೆಯ ಅಂಗವಾಗಿ ಮಹಾದಾಸೋಹ ಯಶಸ್ವಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕಿಂತಲು ವಿಶೇಷವಾಗಿ ಇಂದಿನ ಮಹಾದಾಸೋಹದಲ್ಲಿ ಸಿಹಿ ಲಾಡು (ಬೂಂದಿ), ಪಲಾವ್, ಬದನೆಕಾಯಿ ಪಲ್ಲೆ, ಹುಳಿ ಚಟ್ನಿ, ಮೊಸರು, ತಂಪು ಮಜ್ಜಿಗೆ ಇಂದಿನ ಮಹಾದಾಸೋಹದಲ್ಲಿ ಕಂಡುಬಂದಿತು. ಕೊಪ್ಪಳ ಜಿಲ್ಲೆಯಾದ್ಯಂತ ಅನೇಕ ಭಕ್ತರು ಬೆಳಿಗ್ಗೆ ೧೦.೩೦ ಗಂಟೆಯಿಂದ ಮಹಾಪ್ರಸಾದವನ್ನ ಸ್ವೀಕರಿಸಿ ಸಂತುಷ್ಟರಾದರು. ೩೦ ಕ್ವಿಂಟಲ್ ಸಿಹಿ ಲಾಡು, ೪೦ ಕ್ವಿಂಟಲ್ ಅಕ್ಕಿ, ಸುಮಾರು ೧೦ ಬ್ಯಾರಲ್ ತಂಪು ಮಜ್ಜಿಗೆ ಇಂದಿನ ಮಹಾದಾಸೋಹದಲ್ಲಿ ಬಳಕೆಮಾಡಲಾಗಿದೆ.

ಕಾಮೆಂಟ್‌ಗಳಿಲ್ಲ: