ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ನವೆಂಬರ್ 2, 2010

೧೩ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ "ಪಂಡಿತ ಪುಟ್ಟರಾಜ ಕವಿಗವಾಯಿಗಳ ನೆನಹು" ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುರುಘಾಮಠ ಚಿತ್ರದುರ್ಗದ ಜಮುರಾ ಕಲಾಲೋಕ ತಂಡದವರಾದ ಶ್ರೀ ತೋಟಪ್ಪ ಉತ್ತಂಗಿ ಹಾಗೂ ಶ್ರೀಮತಿ ಕೋಕಿಲಾ ರುದ್ರಮೂರ್ತಿ, ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಭಾಗ್ಯನಗರದ ಸಾಹಿತಿಗಳಾದ ಶ್ರೀ ವಿಠ್ಠಪ್ಪ ಗೋರಂಟ್ಲಿ ಆಗಮಿಸಲಿದ್ದಾರೆ. ಭಕ್ತಿ ಸೇವೆಯನ್ನ ಶ್ರೀ ಎಸ್.ಎನ್ ತಿಮ್ಮನಗೌಡ್ರ ಪ್ರಥಮ ದರ್ಜೆ ಸಹಾಯಕರು, ಎ.ಪಿ.ಎಂ.ಸಿ, ಕೊಪ್ಪಳ ಇವರು ತಮ್ಮ ತಂದೆ ಲಿಂ.ನಿಂಗನಗೌಡ ತಿಮ್ಮನಗೌಡ್ರ ಇವರ ಸ್ಮರಣಾರ್ಥ ಆಯೋಜಿಸಿದ್ದಾರೆ. ಸಕಲ ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಶ್ರೀಮಠದ ಭಕ್ತಾದಿಗಳಿಗೆ ಸೂಚನೆ

೧. ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ನಡೆಯುವ 'ಬೆಳಕಿನೆಡೆಗೆ' ಮಾಸಿಕ ಕಾರ್ಯಕ್ರಮವನ್ನು ದೀಪಾವಳಿ ನಿಮಿತ್ಯ ದಿನಾಂಕ ೦೮-೧೧-೨೦೧೦ ಸೋಮವಾರದಂದು ಶ್ರೀ ಮಠದ ಕೆರೆಯ ದಡದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.