ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಶುಕ್ರವಾರ, ಜನವರಿ 17, 2014

ಗವಿಮಠಕ್ಕೆ ಸಾಗರೋಪಾಧಿಯಲ್ಲಿ ಹರಿದು ಬಂದ ದವಸದಾನ್ಯ ಹಾಗೂ ರೊಟ್ಟಿಗಳು

ಗವಿಮಠಕ್ಕೆ ಸಾಗರೋಪಾಧಿಯಲ್ಲಿ ಹರಿದು ಬಂದ ದವಸದಾನ್ಯ ಹಾಗೂ ರೊಟ್ಟಿಗಳು

http://kannadanet.blogspot.in/2014/01/blog-post_2488.html
ಕೊಪ್ಪಳ: ಶ್ರೀಗವಿಮಠಕ್ಕೆ ಇಂದು ಮಂಗಳೂರು, ಹುಲಿಯಾಪುರ, ಅರಕೇರಿ, ಮಸಬಹಂಚನಾಳ, ಕೋನಾಪುರ, ಗಿಣಗೇರಿ, ಕಲ್ಲತಾವರಗೇರಿ, ಕಾಟ್ರಳ್ಲಿ, ಕದ್ರಳ್ಳಿ, ಕುಷ್ಟಗಿ, ಬೆಣಕಲ್, ನಿಟ್ಟಾಲಿ, ಗುಳದಳ್ಳಿ, ಕುಕ್ಕನಪಳ್ಳಿ, ಹನುಮನಹಳ್ಳಿ, ಕನಕಾಪುರ ತಾಂಡಾ, ಬಿನ್ನಾಳ, ಚಳ್ಳಾರಿ, ಕೊಪ್ಪಳದ ದೇವರಾಜರಸ ಕಾಲೋನಿ, ಗೌರಿಅಂಗಳ ಮೊದಾಲಾದ ಭಕ್ತಾಧಿಗಳಿಂದ ರೊಟ್ಟಿ, ಚಟ್ನಿ, ದವಸ ದಾನ್ಯಗಳು ಮಹಾದಾಸೋಹಕ್ಕೆ ಬಂದಿರುತ್ತವೆ.  

ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯ- ಭೋಜ್ಯಗಳು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ನಿಮಿತ್ಯ ಜರುಗುವ ಮಹಾದಾಸೋಹಕ್ಕಾಗಿ ಭಕ್ತಾಧಿಗಳಿಂದ ಎಳ್ಳುಹಚ್ಚಿದ ಸಜ್ಜಿ ರೊಟ್ಟಿ, ತೆಳ್ಳನ ಬಿಳಿಜೋಳದ ರೊಟ್ಟಿ, ಉಪ್ಪು ತುಂಬಿದ ಕರದ ಮೆಣಸಿನಕಾಯಿ ಚಟ್ನಿ, ಶೇಂಗಾಚಟ್ನಿ, ಗುರಳ್ಳು ಚಟ್ನಿ, ಅಗಸಿಚಟ್ನಿ, ಕೆಂಪು ಹಸೆಮೆಣಸಿನಕಾಯಿಚಟ್ನಿ ಹಾಗೂ ಮಸಾಲಿ ಸವತೆಕಾಯಿಯಉಪ್ಪಿನಕಾಯಿ ಈ ಮೊದಲಾದ ರುಚಿರುಚಿಯಾದ ಖಾದ್ಯಗಳ ಜೊತೆಗೆ ಮಾದಲಿ, ಬೂಂದಿ ಲಾಡುಗಳಂತಹ ಸಿಹಿ ಪದಾರ್ಥಗಳು ಮಹಾದಾಸೋಹಕ್ಕೆ ಸಮರ್ಪಣೆಯಾದವು. 

ಮಹಾದಾಸೋಹಕ್ಕೆ ಮಂಗಳೂರ ಗ್ರಾಮಸ್ಥರ ಸೇವೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಮಂಗಳೂರ ಗ್ರಾಮದ ಭಕ್ರರು ಜಾತ್ರೆಯ ಮಹಾದಾಸೋಹಕ್ಕೆ ೧೫೫ ಕ್ವಿಂಟಲ್ ದವಸದಾನ್ಯ, ೧೦೦೦೦ ರೊಟ್ಟಿ, ೨೫೦ ಕುಂಬಳಕಾಯಿ ಜೊತೆಗೆ ಗ್ರಾಮದ ೫೦ ಜನ ಭಕ್ತರು ಜಾತ್ರಯ ದಿನದಿಂದ ನಿರಂತರವಾಗಿ ೫ ದಿನಗಳ ಕಾಲ ದಾಸೋಹದಲ್ಲಿ ಅಜ್ಜನ ಪ್ರಸಾದ ಹಾಗೂ ಸಾಂಬಾರು ತಯಾರಿಸುವಲ್ಲಿ ನಿರತರಾಗಿರುತ್ತಾರೆ.  
ಸೇವಾಲಾಲ್ ಭಕ್ತರ ಸೇವೆ
ಕೊಪ್ಪಳ: ಜಿನ್ನಾಪುರ ತಾಂಡಾದ ಲಂಬಾಣಿಗಳೇ ವಾಸಿಸುವ ಈ ಪುಟ್ಟ ಹಳ್ಳಿಯ ಸೇವಾಲಾಲ್ ಭಕ್ತರು ಮಹಾರಥೋತ್ಸವದ ೨ ದಿನ ಮುನ್ನ ಜಂಗಮೋತ್ಸವದ ದಿನದಂದು ಪ್ರತಿವರ್ಷ ತಮ್ಮ ಗ್ರಾಮದಿಂದ ಹಲವು ಲಂಬಾಣಿ ಮಹಿಳೆಯರು ಶ್ರೀಗವಿಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಫಲಪುಷ್ಪಗಳನ್ನು ಅರ್ಪಿಸಿದರು






ಕಾಮೆಂಟ್‌ಗಳಿಲ್ಲ: