ಗವಿಮಠಕ್ಕೆ ಸಾಗರೋಪಾಧಿಯಲ್ಲಿ ಹರಿದು ಬಂದ ದವಸದಾನ್ಯ ಹಾಗೂ ರೊಟ್ಟಿಗಳು
http://kannadanet.blogspot.in/2014/01/blog-post_2488.html
ಕೊಪ್ಪಳ: ಶ್ರೀಗವಿಮಠಕ್ಕೆ ಇಂದು ಮಂಗಳೂರು, ಹುಲಿಯಾಪುರ, ಅರಕೇರಿ, ಮಸಬಹಂಚನಾಳ, ಕೋನಾಪುರ, ಗಿಣಗೇರಿ, ಕಲ್ಲತಾವರಗೇರಿ, ಕಾಟ್ರಳ್ಲಿ, ಕದ್ರಳ್ಳಿ, ಕುಷ್ಟಗಿ, ಬೆಣಕಲ್, ನಿಟ್ಟಾಲಿ, ಗುಳದಳ್ಳಿ, ಕುಕ್ಕನಪಳ್ಳಿ, ಹನುಮನಹಳ್ಳಿ, ಕನಕಾಪುರ ತಾಂಡಾ, ಬಿನ್ನಾಳ, ಚಳ್ಳಾರಿ, ಕೊಪ್ಪಳದ ದೇವರಾಜರಸ ಕಾಲೋನಿ, ಗೌರಿಅಂಗಳ ಮೊದಾಲಾದ ಭಕ್ತಾಧಿಗಳಿಂದ ರೊಟ್ಟಿ, ಚಟ್ನಿ, ದವಸ ದಾನ್ಯಗಳು ಮಹಾದಾಸೋಹಕ್ಕೆ ಬಂದಿರುತ್ತವೆ.
ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯ- ಭೋಜ್ಯಗಳು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ನಿಮಿತ್ಯ ಜರುಗುವ ಮಹಾದಾಸೋಹಕ್ಕಾಗಿ ಭಕ್ತಾಧಿಗಳಿಂದ ಎಳ್ಳುಹಚ್ಚಿದ ಸಜ್ಜಿ ರೊಟ್ಟಿ, ತೆಳ್ಳನ ಬಿಳಿಜೋಳದ ರೊಟ್ಟಿ, ಉಪ್ಪು ತುಂಬಿದ ಕರದ ಮೆಣಸಿನಕಾಯಿ ಚಟ್ನಿ, ಶೇಂಗಾಚಟ್ನಿ, ಗುರಳ್ಳು ಚಟ್ನಿ, ಅಗಸಿಚಟ್ನಿ, ಕೆಂಪು ಹಸೆಮೆಣಸಿನಕಾಯಿಚಟ್ನಿ ಹಾಗೂ ಮಸಾಲಿ ಸವತೆಕಾಯಿಯಉಪ್ಪಿನಕಾಯಿ ಈ ಮೊದಲಾದ ರುಚಿರುಚಿಯಾದ ಖಾದ್ಯಗಳ ಜೊತೆಗೆ ಮಾದಲಿ, ಬೂಂದಿ ಲಾಡುಗಳಂತಹ ಸಿಹಿ ಪದಾರ್ಥಗಳು ಮಹಾದಾಸೋಹಕ್ಕೆ ಸಮರ್ಪಣೆಯಾದವು.
ಮಹಾದಾಸೋಹಕ್ಕೆ ಮಂಗಳೂರ ಗ್ರಾಮಸ್ಥರ ಸೇವೆ
.jpg)
ಸೇವಾಲಾಲ್ ಭಕ್ತರ ಸೇವೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ