ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಮಾರ್ಚ್ 8, 2010

ಜ್ಞಾನದಾಸೋಹ

ಶೈಕ್ಷಣಿಕವಾಗಿ ಅತ್ಯಂತ ಹಿದುಳಿದಿರುವ ಕೊಪ್ಪಳ ಜಿಲ್ಲೆಗೆ ಜ್ಞಾನ ದಾಸೋಹ ನೀಡುವ ಉದ್ದೇಶದಿಂದ ೧೯೬೩ ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಘೆ ಆರಂಭಗೊಂಡಿತು. ಶ್ರೀ ಲಿಂ.ಜ. ಮರಿಶಾಂತವೀರ ಸ್ವಾಮಿಗಳು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜು, ಆಯುರ್ವೇದ ಮಹಾವಿದ್ಯಾಲಯ, ಶಿಕ್ಷಕ ತರಬೇತಿ ಸಂಸ್ಥೆ ಬಿ.ಎಡ್. ಕಾಲೇಜಿನವರೆಗೂ ಮಹೋನ್ನತವಾಗಿ ಬೆಳೆಯುತ್ತಾ ಸಾಗಿದೆ. ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿಯ ವ್ಯವಸ್ಥೆಗೊಳಿಸಲು ವಿದ್ಯಾರ್ಥಿನಿಲಯವನ್ನೂ ಸ್ಥಾಪಿಸಿದೆ. ಇಂದಿನ ೧೮ ನೇ ಪೀಠಾಧೀಶ್ವರರಾದ ಅಭಿನವ ಶ್ರೀ ಗವಿಸಿದ್ದೇವಿಶ್ವರ ಮಹಾ ಸ್ವಾಮಿಜಿಗಳು ವಿದ್ಯಾಪ್ರೇಮಿಗಳಿಗೆ ಹೆಚ್ಚಿನ ಸವಲತ್ತು ನೀಡುವಲ್ಲಿ ಗಮನ ಕೇಂದ್ರೀಕರಿಸಿದ್ದು, ಗಮಠವನ್ನು ವಿವಿಧ ದೃಷ್ಠಿ ಕೋನಗಳಿಂದ ಅಭಿವೃದ್ಧಿಪಡಿಸುವಲ್ಲಿಯೂ ನಿರತರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ: