ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಮಾರ್ಚ್ 9, 2010

ಯಶಸ್ವಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಪರಮಪೂಜ್ಯ ಲಿಂ. ಜ. ಶ್ರೀ ಶಿವಶಾಂತವೀರ ಮಹಾಶಿವಯೊಗಿಗಳ ೭ನೇಯ ಪುಣ್ಯಸ್ಮರಣೆಯ ನಿಮಿತ್ಯ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪದ ಮೇರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆತು. ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ವಿವಿಧ ತಜ್ಞ ವೈದ್ಯರು ವಿವಿಧ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿದರು. ತಜ್ಞ ವೈದ್ಯರುಗಳಾದ ಡಾ||ಎಸ್.ಪಿ.ಬಳಿಗಾರ, ನರರೋಗ ತಜ್ಞರು ಹುಬ್ಬಳ್ಳಿ ಇವರು ೫೦೮, ಡಾ||ಷಣ್ಮುಖ ಹಿರೇಮಠ ಹೃದಯ ರೋಗ ತಜ್ಞರು ಹುಬ್ಬಳ್ಳಿ ೨೬೨, ಡಾ|| ಅಜಯಕುಮಾರ, ಮಾನಸಿಕ ರೋಗ ತಜ್ಞರು ೨೭೨, ಡಾ|| ಸದಾಶಿವ ಸೊಪ್ಪಿಮಠ, ಉದರರೋಗ ತಜ್ಞರು ಹುಬ್ಬಳ್ಳಿ ೨೩೦, ಡಾ|| ಆರ್.ಬಿ.ನೆರ್ಲಿ, ಮೂತ್ರಪಿಂಡ ತಜ್ಞರು ೧೫೦, ಡಾ|| ಶ್ರೀನಿವಾಸ .ಎಚ್. ಚಿಕ್ಕಮಕ್ಕಳ ತಜ್ಞರು ಕೊಪ್ಪಳ ೧೫೧, ಡಾ|| ಉಮೇಶ ನಾಗಲೋಟಿಮಠ. ಇ.ಎನ್.ಟಿ ತಜ್ಞರು, ಹುಬ್ಬಳ್ಳಿ ೨೬೨, ಡಾ|| ಉಮೇಶ ರಾಜೂರ, ಮಧುಮೇಹ ಇತರೆ, ಹುಬ್ಬಳ್ಳಿ ೧೮೦, ಡಾ|| ಬಿ.ಎಸ್.ಸವಡಿ ಮೂಲವ್ಯಾದಿ ತಜ್ಞರು ೭೦, ಡಾ|| ಎಸ್.ಎಂ.ಹಕ್ಕಂಡಿ, ಚರ್ಮ ರೋಗ ತಜ್ಞರು ಕೊಪ್ಪಳ ೧೭೯, ಡಾ|| ಬಿ.ಎಚ್.ಮನೋಹರ. ಪಾರ್ಶ್ವವಾಯು ತಜ್ಞರು ಕೊಪ್ಪಳ ೧೪೮, ಡಾ|| ಗವಿ ಪಾಟೀಲ, ಸಂದಿರೋಗ ತಜ್ಞರು, ಕೊಪ್ಪಳ ೪೦೩, ಡಾ|| ಬಿ.ಎಲ್.ಕಲ್ಮಠ, ಶ್ವಾಸಕೋಶ ತಜ್ಞರು ಕೊಪ್ಪಳ ೧೫೩, ಡಾ|| ಆರ್.ಪಿ ದೇವರಗುಡಿ, ಸ್ತ್ರೀರೋಗ ತಜ್ಞರು, ಕೊಪ್ಪಳ ೯೨ ಒಟ್ಟು ೩೦೬೫ ಕ್ಕಿಂತ ಹೆಚ್ಚು ರೋಗಿಗಳು ಇಂದಿನ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು ಎಂದು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಬಿ.ಎಸ್. ಸವಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: