ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಜನವರಿ 10, 2012

೩೦ ಟ್ರ್ಯಾಕ್ಟರ್ ಕಲ್ಲು ಕಾಣಿಕೆ






ಕೊಪ್ಪಳ: ಕೊಪ್ಪಳದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಾ ಕೊಪ್ಪಳ ನಾಡಿನ ಉತ್ಸವವಾಗಿ ಜರುಗುತ್ತಿರುವುದು ಶ್ರೀಗವಿಮಠದ ವೈಶಿಷ್ಟತೆಗೆ ಸಾಕ್ಷಿಯಾಗಿದೆ. ಶ್ರೀ ಗವಿಮಠದ ಮಹಾದಾಸೋಹಕ್ಕೆ ಮಹಾಪೂರದಂತೆ ಕಾಣಿಕೆ, ದೇಣಿಗೆಗಳು ಹರಿದುಬರುತ್ತಿರುವುದು ಶ್ರೀಗವಿಮಠದ ಪ್ರಸಿದ್ಧಿಗೆ ಪ್ರೇರಕವಾಗಿದೆ. ಈ ವರ್ಷದ ಮಹಾದಾಸೋಹಕ್ಕೆ ಎಲ್ಲಾ ಸ್ವರೂಪದ ದಾನಗಳು ಬರುತ್ತಿವೆ. ಬರದ ನಡುವೆ ಬರಪೂರದಂತೆ ಜಾತ್ರೆಯ ದಾಸೋಹಕ್ಕೆ ಕಾಣಿಕೆಗಳು ಬರುತ್ತಿವೆ ಕೊಪ್ಪಳದ ವಡ್ಡರ ಸಮಾಜದ ಭಕ್ತರು ಮೆರವಣಗೆ ಮೂಲಕ ೩೦ ಟ್ರ್ಯಾಕ್ಟರ್ ಕಲ್ಲುಗಳನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ: